You may have to Search all our reviewed books and magazines, click the sign up button below to create a free account.
ಈ ಊರಿಗೆ ಎರಡು ಹೆಸರು. ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ. ಬಸ್ಸಿನ ಬೋರ್ಡಿನ ಮೇಲೆ ಕಲ್ಯಾಣಪುರ... ಯಾಕೆ ಹೀಗೆ ಅನ್ನುತ್ತೀರಾ? ಅದಕ್ಕೆ ಒಂದು ದೊಡ್ಡ ಪುರಾಣವೇ ಇದೆ. ಈ ಊರಿನ ಮೂಲ ದೇವರು ಶಂಭುಲಿಂಗೇಶ್ವರ. ಈಗ ನೂರಾರು ವರ್ಷಗಳ ಹಿಂದೆ ಆ ಶಂಭುಲಿಂಗೇಶ್ವರನ ಒಂದು ಗಣ ಈ ಕಟ್ಟೆಯಮೇಲೇ ಸ್ಥಾಪನೆಯಾಗಿತ್ತಂತೆ. ಆಗ ಜನರೆಲ್ಲ ಕೋಳಿ ...
ಬೇರೆಬೇರೆ ಕಾಲದೇಶಗಳಿಗೂ ವಿಭಿನ್ನ ಸಂಸ್ಕೃತಿ-ನಾಗರಿಕತೆಗಳಿಗೂ ತನ್ನತನ್ನದೇ ನೆಲೆಯಲ್ಲಿ ಗ್ರಹಿಸಲು ಸಾಧ್ಯವಿರುವ ಒಂದು ವಿಶಿಷ್ಟ ಬಹುಧ್ವನಿ ಚೆಕಾಫನ ಎಲ್ಲ ನಾಟಕಗಳ ಒಡಲೊಳಗೆ ಅಡಗಿಕೊಂಡಿದೆ. `ಅಂಕಲ್ ವಾನ್ಯಾ’ ಕೃತಿಗೆ ಸಂಬಂಧಿಸಿ, ಚುಟುಕಾದ ಎರಡೇ ಉದಾಹರಣೆ ಹೇಳುವುದಾದರೆ – ಕ್ರಿಶ್ಚಿಯನ್ ಧರ್ಮಾನುಸಾರಿಯಾದ ಪಾಶ್ಚ...
ಈ ನಾಟಕದ ಒಂದು ಪಾತ್ರ ಒಂದು ಕಡೆ ಹೀಗೆ ಹೇಳುತ್ತದೆ: ಇದೊಂದು ವಿಶಿಷ್ಟ ಪದಪ್ರಯೋಗ. ಇದು ಸ್ವತಃ ನಮ್ಮ ಭಾರತಯಾತ್ರೆಯೂ ಹೌದು; ಭಾರತವೇ ಸ್ವತಃ ನಡೆಸುತ್ತಿರುವ ಯಾತ್ರೆಯೂ ಹೌದು. ಆಚಾರ್ಯ ಶಂಕರರಂಥವರು ಇಂಥ ಯಾತ್ರೆ ಮಾಡತಾ ಮಾಡತಾ ಭಾರತವನ್ನು ನೋಡಿದರು ಮಾತ್ರವಲ್ಲ; ತಮ್ಮ ಯಾತ್ರೆಯ ಮೂಲಕವೇ, ನಾನಾ ರೀತಿಯ ವೈವಿಧ್ಯಮಯ ಜೀವಿಗ...
ಹರಿಯೋ ಹೊಳೆ ಅಂದರೆ ಏನು? ಕವಿಗಳು ಹೇಳತಾರೆ - ಸದಾ ನಿಂತೇ ಇರೋ ಬೆಟ್ಟಕ್ಕೆ ಓಡಾಡಬೇಕು ಅನ್ನಿಸಿದಾಗ, ಅಥವಾ ಬಾಯಿಲ್ಲದೆ ಇರುವ ಕಾಡಿಗೆ ಮಾತಾಡಬೇಕು ಅನ್ನಿಸಿದಾಗ, ಮತ್ತೆ ನಮ್ಮನ್ನೆಲ್ಲ ಹೊತ್ತ ಭೂಮಿಗೆ ನಗಬೇಕು ಅನ್ನಿಸಿದಾಗ, ಆ ಎಲ್ಲ ಆಕಾಂಕ್ಷೆಗಳೇ ಪಡೆಯುವ ರೂಪ - ಹೊಳೆ. ಆದರೆ ಮನುಷ್ಯರ ಅಪೇಕ್ಷೆ ಅದಕ್ಕೆ ತದ್ವಿರುದ್ಧ. ಹರ...
ಮರಳಿನ ಮೇಲೆ ಕಟ್ಟುವ ಆರ್ಥಿಕತೆ ಬಹಳ ದಿನ ಉಳಿಯುವುದಿಲ್ಲ ಎಂಬ ಮಾತಿನಿಂದ ಹೊರಟು, ಚೌಡಿ ಚಾಮುಂಡಿಯಾಗಿ ಅವತಾರ ಎತ್ತುವ ಮಹಾನಾಟಕದ ತನಕ ಹಳೆಯೂರಿನಲ್ಲಿ ನಡೆಯುವ ಪ್ರಸಂಗಗಳೇ ಕುತೂಹಲಕಾರಿ... ಟೂರಿಸಮ್ಮು ಎಂಬ ತಮಾಷೆ, ಮೊಬೈಲು ಎಂಬ ಜೋಕು, ದುಡ್ಡಿನೊಂದಿಗೆ ಬದಲಾಗುವ ವೇಷ, ನಾವು ಬದಲಾಗುವುದು ಕೇವಲ ಹೊರಗಿನಿಂದಲೇ ಎಂದು ಸಾ...
ಇಂಗ್ಲೀಷ್ ಲೇಖಕ ಇ. ಎಮ್. ಫಾರ್ಸ್ಟರ್ ಹೇಳಿದ ಒಂದು ಮಾತು ನೆನಪಾಗುತ್ತದೆ- 'ಓನ್ಲೀ ಕನೆಕ್ಟ್'. ಸಂಬಂಧವಿದೆ ಎಂದು ನಾವು ತಿಳಿಯದೇ ಇರುವ ವಿದ್ಯಮಾನಗಳಲ್ಲಿ, ಥಟ್ಟನೆ ಒಂದು ಸಂಬನ್ಧವನ್ನು ಕಾಣಿಸುವುದು ಜಾಣತನ ಮಾತ್ರವಲ್ಲ; ಅದೊಂದು ನೋಡುವ ಕ್ರಮ. ಅಕ್ಷರನ 'ಸ್ವಗತ'ದ ಹಲವೆಡೆ ಈ ಗುಣವನ್ನು ಕಂಡಿದ್ದೇನೆ... ಇಲ್ಲಿ ಸ್ವಾರಸ್ಯವಿ...
ಶೇಕ್ಸ್ಪಿಯರ್ ತನ್ನ ಬರಹದ ಬದುಕಿನ ಕಡೆಯ ಘಟ್ಟದಲ್ಲಿ ಬರೆದ ರಮ್ಯ-ಹರ್ಷ-ದುರಂತ ಮಿಶ್ರಿತ ಗುಣದ ನಾಟಕಗಳಲ್ಲೊಂದು -- ‘ದಿ ವಿಂಟರ್ಸ್ ಟೇಲ್’. ನಾಲ್ಕು ನೂರು ವರ್ಷಗಳ ಕೆಳಗೆ, ನಮಗಿಂತ ತುಂಬ ಬೇರೆಯದೇ ಆದೊಂದು ಕಾಲದೇಶ ಸಂದರ್ಭದಲ್ಲಿ ರಚಿತವಾದ ಈ ನಾಟಕವು ೨೧ನೆಯ ಶತಮಾನದ ಆದಿಯಲ್ಲಿರುವ ನಮಗೆ ತುಂಬ ಪರಿಚಿತವೂ ಆಪ್ತವೂ ಆದ ಕ...
ಶ್ರೇಷ್ಠವಾದ ಪ್ರಹಸನಗಳು ವಾಸ್ತವದಲ್ಲಿರುವ ಅಸಂಬದ್ಧತೆಯನ್ನೂ, ಅಸಂಬದ್ಧತೆಯಲ್ಲಿರುವ ವಾಸ್ತವವನ್ನೂ, ಭಯಾನಕದಲ್ಲಿರುವ ಹಾಸ್ಯವನ್ನೂ, ಹಾಸ್ಯದಲ್ಲಿರುವ ಭಯಾನಕವನ್ನೂ ಕಾಣಿಸುತ್ತವೆ - ಎಂದೊಬ್ಬ ವಿಮರ್ಶಕ ಹೇಳುತ್ತಾನೆ. ‘ಸಾಹೇಬರು ಬರುತ್ತಾರೆ’ ಈ ಗುಣಗಳಿರುವಂತಹ ಒಂದು ಪ್ರಹಸನ. ಒಂದು ಸಾಧಾರಣ ಪೇಟೆಯ ವಾಸ್ತವವನ್ನು ...
'ಮಾಲತೀಮಾಧವ' ನಾಟಕದ ಕಥೆಯನ್ನು ಒಂದೇ ಸಾಲಿನಲ್ಲಿ ಹೇಳಬಹುದು - ಮಾಲತಿ ಮತ್ತು ಮಾಧವ ಎಂಬ ಇಬ್ಬರು ಪ್ರೇಮಿಗಳು ತಮ್ಮ ಸಮಾಗಮಕ್ಕಿರುವ ಹಲವು ತೊಡಕುಗಳನ್ನು ದಾಟಿ ಕಡೆಗೂ ಮದುವೆಯಾಗುತ್ತಾರೆ - ಇಷ್ಟೇ! ಜತೆಗೆ ಇನ್ನೂ ಎರಡು ಜೋಡಿಗಳೂ ಈ ನಾಟಕದ ತುದಿಗೆ ಒಂದಾಗುತ್ತವೆ - ಮಾಧವನ ಗೆಳೆಯ ಮಕರಂದ ಮತ್ತು ಮಾಲತಿಯ ಗೆಳತಿ ಮದಯಂತಿಕೆಯ...
ಶಂಕರ ವಿಹಾರ ಆದಿಶಂಕರರನ್ನು ಕೇಂದ್ರದಲ್ಲಿಟ್ಟುಕೊಂಡು ಅದ್ವೈತ ಮತ್ತು ಬೇರೆ ಭಾರತೀಯ ದರ್ಶನಗಳ ಲೋಕದಲ್ಲಿ ನಡೆಸಿರುವ ಒಂದು ಮಾನಸಿಕ ಪ್ರವಾಸ ಕಥನ ಈ ಪುಸ್ತಕ. ಆದಿಶಂಕರರನ್ನು ಕುರಿತ ಆಧುನಿಕ ಕಾಲದ ಅಪಕಲ್ಪನೆಗಳ ಚಿತ್ರಗಳನ್ನೊಳಗೊಂಡ 'ಶಂಕರ ವಿಕಲ್ಪ' ಎಂಬ ಕಂಡಿಕೆಯೊಂದಿಗೆ ಈ ಕಥನವು ಆರಂಭವಾಗುತ್ತದೆ. ಆಮೇಲೆ, ಶಂಕರರ ಚಿ...